
12th July 2025
ಸೂರ್ಯ ಏಳುವ ಶುಭ ಸೂಚನೆ ಪ್ರಾಣಿ-ಪಕ್ಷಿಗಳಿಗೆ ತಿಳಿಯುತ್ತದೆ ಅಂತಹ ಸಂದರ್ಭದಲ್ಲಿ ಕೋಳಿ ಕೂಗುವುದು ಗಮನಹರ ಆದರ ಜೊತೆ ಮುಂಜಾನೆ ಆಕಾಶವಾಣಿಯ ರೇಡಿಯೋ ಮೂಲಕ ಬಿತ್ತರವಾಗುತ್ತಿದ್ದ ಸುಬ್ಬಲಕ್ಷ್ಮಿ ಅವರ ಕೌಶಲ್ಯ ಸುಪ್ರಜಾ ರಾಮ ಎಂಬ ಸುಪ್ರಭಾತದ ಇಂಪಾದ ಧ್ವನಿ ಕರ್ಣಗಳಿಗೆ ತಲುಪಿದಾಗ ಅದರಿಂದ ಬೆಳಗಾಗಿದೆಯಂದು ಉಲ್ಲಾಸದಿಂದ ನಾವೆಲ್ಲ ಏಳುತ್ತಿದ್ದೆವು ಮಂಜು, ಮುಸುಕಿದ ಬೆಳಕನು ನೋಡಿ ಸವಿಯುವುದೇ ಆನಂದ ಎಲೆಗಳ ಮೇಲೆ ಮುತ್ತಿನಂತ ಇಬ್ಬನಿಯ ಕುಳಿತಿರಲು ಹಕ್ಕಿಗಳ ಝೇಂಕಾರ ಈ ಸುಪ್ರಭಾತಕ್ಕೆ ಇನ್ನಷ್ಟು ಮೆರುಗು ನೀಡುತ್ತಿತ್ತು ಹಚ್ಚ ಹಸಿರಿನ ಪರಿಸರ ಬಣ್ಣ ಬಣ್ಣದ ಪರಿಮಳದ ಹೂಗಳ ನಮ್ಮನ್ನು ಮನ ಸೆಳೆಯುತ್ತಿತ್ತು. ಬಾನಲ್ಲ ಕೆಂಪೇರಿ ಉದಯಿಸಿದ ಭಾಸ್ಕರ ಜಗವೆಲ್ಲ ನೀಡುವ ಬೆಳಕು ಆ ಎಳೆಯ ಕಿರಣಗಳ ರಶ್ಮಿ ನೋಡಲು ಹಿತಕರ. ಒಡಿಸ್ಸಾದಲ್ಲಿ ಸೂರ್ಯನ ದೇವಾಲಯ ಸಮೀಪ ಇರುವ ಸಮುದ್ರದ ಮಧ್ಯದಲ್ಲಿ ಮೊದಲು ಉದಯಿಸುವ ಸೂರ್ಯನ ಹೊಂಗಿರಣಗಳನ್ನು ನಾವು ವೀಕ್ಷಿಸಬಹುದು ಸೂರ್ಯನ ಬೆಳಕು ಹೆಚ್ಚಾದಂತೆ ಪ್ರಕೃತಿಯ ಸೊಬಗು ಆನಂದಿಸುತ್ತ ಅಂಗಳದಲ್ಲಿ ಹಸುರಾದ ಗರಿಕೆಯ ಮೇಲೆ ನಡೆದಾಗ ಸಿಗುವ ಅಹ್ಲಾದಕರ ಶಕ್ತಿಯು ನಮ್ಮನ್ನು ಬಲಗೊಳಿಸುತ್ತಿತ್ತು.
ಋಷಿಮುನಿಗಳು ಜನಿಸಿರುವ ಈ ದೇಶ ಸಂಸ್ಕೃತಿ ಪರಂಪರೆಯ ನಮ್ಮದು ಬ್ರಹ್ಮಿ ಮುಹೂರ್ತದಲ್ಲಿ ಎದ್ದು ದಿನವನ್ನು ಆರಂಭಿಸಿದಾಗ ಪ್ರತಿಯೊಂದು ಕೆಲಸವು ಉತ್ಸಾಹದಿಂದ ಕೂಡಿರುತ್ತದೆ ದಿನ ಪೂರ್ತಿ ಚೈತನ್ಯವಾಗಿ ಇರಲು ಕಾರಣವಾಗುತ್ತದೆ ಮುಂಜಾನೆಯ ಸೂರ್ಯನ ಕಿರಣಗಳು ನಮಗೆ ಸ್ಪರ್ಶಿಸಿದಾಗ ವಿಟಮಿನ್ ಡಿ ಅಂತಹ ಶಕ್ತಿಯನ್ನು ನಮಗೆ ನೇರವಾಗಿ ಸಿಗುತ್ತದೆ. ಸೂರ್ಯನಿಂದ ಸಕಲ ಜೀವರಾಶಿಗಳಿಗೂ ಜಡತ್ವವನ್ನು ಕಳೆದು ದಿನನಿತ್ಯದ ಕೆಲಸಕ್ಕೆ ಹುರುಪು ಸಿಗುವುದು ಆಗ ಮಾಡಿದ ವಿದ್ಯಾಭ್ಯಾಸವು ಸಹ ಎಲ್ಲರ ತಲೆಯಲ್ಲೂ ಹಾಗೆಯೇ ಉಳಿಯುವುದು. ಮುಂಜಾನೆ ಎದ್ದು ನೇಗಿಲ ಹಿಡಿದು ಹೊರಟ ರೈತನ ಮೊಗವು ಅರಳಿರುವುದು.ನಾವು ಮುಂಜಾನೆಯದ್ದು ಸೂರ್ಯನನ್ನು ಸ್ವಾಗತಿಸುವ ಹಿತವೇ ಬೇರೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಇದೆಲ್ಲ ಮರೆಯಾಗುತ್ತಿದೆ ಜೀವನದ ಶೈಲಿಯೇ ಬದಲಾಗಿದೆ ಮಲಗುವ ಹೇಳುವ ಸಮಯವೂ ಸರಿಯಾಗಿಲ್ಲದೆ ಎಲ್ಲ ಕೆಲಸಗಳು ಕಾರ್ಯಗಳು ಸಹ ಬದಲಾಗುತ್ತಿದೆ ಬಹು ಎತ್ತರದಲ್ಲಿ ನಿರ್ಮಾಣಗೊಂಡ ಭವನಗಳು ಸೂರ್ಯನ ಶಾಖವು ಮತ್ತು ಸೂರ್ಯನ ಕಿರಣಗಳನ್ನು ಹೊಸ್ತಿಲನ್ನು ದಾಟಲು ಬಿಡುವುದಿಲ್ಲ ಮತ್ತು ಮನೆಯ ಬಾಗಿಲನ್ನು ತಲುಪಲು ವಿಳಂಬವಾಗುತ್ತದೆ ಹಾಗೆ ನೈಸರ್ಗಿಕ ಬೆಳಕು ಸಿಗದೇ ಎಲ್ಲರೂ ವಂಚಿತರಾಗುತ್ತಿದ್ದಾರೆ ಈಗಿನ ಮುಂಜಾವು ಮಕ್ಕಳು ಟಿವಿ ಮೊಬೈಲಲ್ಲೇ ನೋಡಿ ಆನಂದಿಸುತ್ತಿದ್ದಾರೆ ಎಷ್ಟು ಮಕ್ಕಳಿಗೆ ವಿಟಮಿನ್ ಡಿ ಕೊರತೆಯಿಂದಾಗಿ ಸರಿಯಾದ ಬೆಳವಣಿಗೆಯನ್ನು ಹೊಂದದೆ ಅಂಗಾಗಗಳು ಬಲಹೀನವಾಗುತ್ತಿವೆ ಇಂದು ನಾವು ಸಾಫ್ಟ್ವೇರ್ ಉದ್ಯಮಿಗಳಾಗಿ ಕೂತಲ್ಲಿಯೇ ಕೆಲಸ ಮಾಡುವುದರಿಂದ ಸೂರ್ಯನ ಶಾಖದಿಂದ ವಂಚಿತರಾಗಿದ್ದಾರೆ. ಸೂರ್ಯನ ಕಿರಣಗಳೇ ಹಲವು ರೋಗಗಳಿಗೆ ಔಷಧಿಯಾಗಿದೆ.
✍️ ಶ್ರೀಮತಿ ರಮಾ ಕೆ
ಕಲಘಟಗಿ
📞9449159855
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ